ಬನಶಂಕರಿ ಮೂವೀ ಕ್ರಿಯೇಷನ್ಸ್ ಲಾಂಛನದಲ್ಲಿ ಎಸ್.ರಮೇಶ್ ಆವರು ನಿರ್ಮಿಸುತ್ತಿರುವ ‘ವಿಕ್ಕಿ’ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.
ಜೈ- ಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪೀಟರ್ ಅವರ ಸಂಗೀತ ನಿರ್ದೇಶನ ಹಾಗೂ ಅರುಣ್ ಅವರ ಛಾಯಾಗ್ರಹಣವಿದೆ.
ಆರ್ಯ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಸ್ವಾತಿ. ಸುಂದರರಾಜ್, ಕೀರ್ತಿ ರಾಜ್, ರಘು ನಾಯಕ್, ಬ್ಯಾಂಕ್ ಜನಾರ್ದನ್, ಮನಮೋಹನ್ ರೈ, ಗುಬ್ಬಿ ನಟರಾಜ್, ಕೆಂಪೇಗೌಡ, ರತ್ನಕುಮಾರಿ, ಸುಜಾತ ಗೌಡ, ರವಿಕಲ್ಯಾಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.